ರಾಜ್ಯದ ಹಾಗೂ ಕ್ಷೇತ್ರದ ಸರ್ವಾಂಗಿಣಿ ಅಭಿವೃದ್ಧಿಗೆ ಜಾತ್ಯಾತೀತ ಜನತಾದಳಕ್ಕೆ ಮತ ನೀಡಿ ಆಶೀರ್ವದಿಸಿ


ಪ್ರಗತಿವಾಣಿ ಕೊಪ್ಪಳ
ಯಲಬುರ್ಗಾ : ರಾಜ್ಯದಲ್ಲಿ ಕುಮಾರ ಸ್ವಾಮಿ ಯವರಿಗೆ ಇದ್ದಷ್ಟು ರೈತ ಪರ ಚಿಂತನೆ ಮತ್ಯಾರಿಗೂ ಇಲ್ಲ ನಮ್ಮ ಸರಕಾರ ಅಧಿಕಾರಕ್ಕೆ  ಬಂದರೆ ಪಂಚರತ್ನ ಯೋಜನೆಗಳನ್ನ ಜಾರಿ ಮಾಡಲಾಗುವದು ಎಂದು ಜೆಡಿಎಸ್ ಅಭ್ಯರ್ಥಿ ಮಲ್ಲನಗೌಡ ಕೋನನಗೌಡ್ರ ಹೇಳಿದರು

ತಾಲೂಕಿನ ತರಲಕಟ್ಟಿ ಗ್ರಾಮದಲ್ಲಿ  ಗುರುವಾರ ಸಂಜೆ ಮತದಾರರನ್ನುದ್ದೇಶಿಸಿ ಮಾತನಾಡಿದ ಅವರು ಮಾಜಿ ಮುಖ್ಯಮಂತ್ರಿ  ಕುಮಾರ ಸ್ವಾಮಿಯವರು ಅನೇಕ ಜನಪರ ವಾದ ಯೋಜನೆಗಳನ್ನ  ಅವರ ಅಧಿಕಾರದ ಅವದಿಯಲ್ಲಿ ರೈತರ ಸಾಲಮನ್ನಾ ಮಾಡಿದ್ದಾರೆ.ಮತ್ತೆ ನೀವೂ ಜೆಡಿಎಸ್ ಪಕ್ಷಕ್ಕೆ ಮತ ನೀಡಿ ಆಶೀರ್ವದಿಸಿದರೆ ಪುನಹ ಪಂಚರತ್ನ  ಯೋಜನೆಗಳಾದ ಸಂದ್ಯಾಸುರಕ್ಷಾಯೋಜನೆ ಮಾಸಿಕ 5000 ರೂಪಾಯಿ,ಮತ್ತು ಅಂಗವೀಕಲರು ಹಾಗೂ ವಿಧವಾ ವೇತನ ಮಾಸಿಕ 2500 ಗರ್ಭಿಣಿ ಮಹಿಳೇರಿಗೆ ತಿಂಗಳಿಗೆ 6000 ರೂಪಾಯಿಯಂತೆ 6 ತಿಂಗಳವರಗೆ 36000 ರೂಪಾಯಿ ,ನೀಡುವದು ,ಬಡತನ ರೇಖೆಗಳಿಗಿಂತ ಕೆಳಗಿದ್ದವರಿಗೆ ಬಸ್ಸ ಸೌಕರ್ಯ ಇಲ್ಲದ ಗ್ರಾಮಗಳಲ್ಲಿ ವಿದ್ಯಾರ್ಥಿಗಳಿಗೆ ಅನಕೂಲವಾಗಲೆಂದು ಏಲೇಕ್ಟ್ರೀಕಲ್ ಬೈಕ್, ಹಾಗೂ ರೈತ ಮಕ್ಕಳಿಗೆ ಮದುವೆಯಾಗುವಂತ ಮಹಿಳೆಯರಿಗೆ 2 ಲಕ್ಷರೂಪಾಯಿ  ಪ್ರೊತ್ಸಾಹಧನ ನೀಡಲಾಗುವದು. ಹಾಗೂ ಒಂದು ಕುಟುಂಬಕ್ಕೆ ಪ್ರತಿ ತಿಂಗಳ 2000 ರೂಪಾಯಿ ವೇತನ ಜಮೀನು ಇಲ್ಲದೆ ಕೃಷಿ ಕಾರ್ಮಿಕರಿಗೆ  ಒಂದು ಕುಟುಂಬಕ್ಕೆ ಪ್ರತಿ ತಿಂಗಳ 2000 ನೀಡಲಾಗುವದು  ರೂಪಾಯಿ ಹಾಗೂ  ಸ್ತ್ರೀಶಕ್ತಿ ಸಂಘಗಳ  ಸಾಲ ಮನ್ನಾ ಹಾಗೂ ರೈತರಿಗೆ ಅನುಕೂಲವಾಗಲೆಂದು ಬಿತ್ತನೆ ಬೀಜ ಗೋಬ್ಬರ ಖರಿದಿ ಮಾಡಲು  ಪ್ರತಿ ರೈತರಿಗೆ ಎಕರೆಗೆ 10000 ಪ್ರೋತ್ಸಾಹ ಧನ  ನೀಡಲಾಗುವದು  ಆದ್ದರಿಂದ ಕುಮಾರ ಸ್ವಾಮಿ ಮುಖ್ಯಮಂತ್ರಿ ಯಾಗಬೇಕು ಕುಮಾರ ಸ್ವಾಮಿ ಮುಖ್ಯಮಂತ್ರಿ ಯಾಗಬೇಕಾದರೆ ತಾವೂಗಳು ಜಾತ್ಯಾತೀತ ಜನತಾದಳಕ್ಕೆ ಮತನೀಡಿ ನನ್ನನ್ನ ಗೆಲ್ಲೀಸಬೇಕೆಂದು ಮನವಿ ಮತಯಾಚನೆ ಮಾಡಿದರು ಬಸವರಾಜ  ರಾಯರಡ್ಡಿ ಹಾಗೂ ಹಾಲಪ್ಪ ಆಚಾರ ಕೆರೆಗಳಿಗೆ ನಾನು ಅನುಮೋದನೆ ಮಾಡಿರುವೆ ಎಂದು ಯಾವ ಆಧಾರಲ್ಲಿ ನೀವೂ ಹೇಳುತಿದ್ದಿರಿ  ನಮ್ಮ ಕುಮಾರ ಸ್ವಾಮಿ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಕೆರೆಗಳಿಗೆ ಅನುಮೋದನೆ ಮಾಡಿಸಿದ್ದಾರೆ ಹಾಲಪ್ಪ ಆಚಾರ ಬಸವರಾಜ ರಾಯರಡ್ಡಿ ಸುಳ್ಳು ಹೇಳಿ ಜನರ ದಾರಿ ತಪ್ಪಿಸುತಿದ್ದಾರೆ ಇವರ ಮಾತಿಗೆ ಕಿವಿಗೊಡ ಬೇಡಿ ಎಂದು ಹೇಳಿದರು. 

ಜೆಡಿಎಸ್‌ ಕಾರ್ಯಾಧ್ಯಕ್ಷ ಶರಣಪ್ಪ ರಾಂಪೂರ,ಪ್ರಧಾನ ಕಾರ್ಯದರ್ಶಿ ಬಸವರಾಜ ಗುಳಗುಳಿ,ಮುಖಂಡರುಗಳಾದ ಕೆಂಚಪ್ಪ ಮನ್ನಾಪುರ,ಮಾರುತಿ ಹಿರೇ ವಡ್ರಕಲ್.ಗವಿ ಬೇವೂರ,ಬಾಳಪ್ಪ ,ಮುದಿಯಪ್ಪ ನಾಗರಡ್ಡಿ ಪ್ರಾಣೇಶ ಕಟ್ಟಿ,ಸೇರಿದಂತೆ ಮತ್ತೀತರರು ಉಪಸ್ಥೀತರಿದ್ದರು.

---------

0/Post a Comment/Comments