ಜ್ಞಾನ ಜಗತ್ತನ್ನೇ ಆಳುತ್ತದೆ

ಪ್ರಗತಿವಾಣಿ ಕೊಪ್ಪಳ
ಯಲಬುರ್ಗಾ: ಮನುಷ್ಯನಿಗೆ ಸಿರಿಸಂಪತ್ತು ದೊಡ್ಡದಲ್ಲ. ಆತನಲ್ಲಿ ಜ್ಞಾನ ಇದ್ದರೆ ಇಡೀ ಜಗತ್ತನ್ನೇ ಆಳುವ ಶಕ್ತಿ ಇರುತ್ತದೆ ಎಂದು ಸಂಸ್ಥಾನ ಹಿರೇಮಠದ ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀ ಮೊಗ್ಗಿ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಭಾನುವಾರ ಶ್ರೀಧರ ಮುರಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿಗಳ ೨೧ನೇ ವಾರ್ಷಿಕ ಪಿಠಾರೋಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜ್ಞಾನ ಕೈಹಿಡಿದು ನಡೆಸುತ್ತದೆಯೇ ಹೊರತು, ಅಜ್ಞಾನ ನಡೆಸುವುದಿಲ್ಲ. ಎಪಿಜೆ ಅಬ್ದುಲ್ ಕಲಾಂ, ಶಿವಕುಮಾರ ಸ್ವಾಮೀಜಿ, ಸಿದ್ದೇಶ್ವರ ಶ್ರೀಗಳು ಆದಿಯಾಗಿ ಹೀಗೆ ಅನೇಕ ಮಹಾನ್ ಪುರುಷರು ಜ್ಞಾನ ಸಂಪಾದಿಸಿ ಜಗತ್ತಿಗೆ ಮಾದರಿಯಾಗಿದ್ದಾರೆ. ಬಸವಲಿಂಗೇಶ್ವರ ಶ್ರೀಗಳು ಓರ್ವ ಕಾರ್ಯಕ ಯೋಗಿಗಳಾಗಿ ಸಮಾಜಮುಖಿ ಕಾರ್ಯಕ್ರಮ ಮಾಡುವ ಮೂಲಕ ಭಕ್ತರ ಪಾಲಿಗೆ ಆಶಾಕಿರಣವಾಗಿದ್ದಾರೆ ಎಂದರು.
ಖೇಳಗಿಯ ವಿರಕ್ತಮಠದ ಶ್ರೀ ಶಿವಲಿಂಗ ಸ್ವಾಮೀಜಿ ಮಾತನಾಡಿ ನಾಡಿನಲ್ಲಿ ಮಠ ಮಾನ್ಯಗಳು ತಮ್ಮದೇಯಾದ ಸಾಮಾಜಿಕ ಕೊಡುಗೆಯನ್ನು ನೀಡಿವೆ. ಮಠಾಧೀಶರನ್ನು ಅಧ್ಯಾತ್ಮಿಕ, ಧಾರ್ಮಿಕ ಸಮಾರಂಭಗಳಿಗೆ ಆಹ್ವಾನಿಸುವುದರ ಜತೆಗೆ ಭಕ್ತರಿಗೆ ಜ್ಞಾನಾಮೃತ ಉಣಬಡಿಸುವ ಕೆಲಸ ನಡೆಯುತ್ತಿರುವುದು ಮೆಚ್ಚುಗೆಯ ಕಾರ್ಯ. ಶ್ರೀಗಳು ಶಿಕ್ಷಣ ಸಂಸ್ಥೆ, ಗೋಶಾಲೆ, ಯೋಗಕೇಂದ್ರ ಸೇರಿದಂತೆ ಅನೇಕ ಸಾಮಾಜಮುಖಿ ಕಾರ್ಯ ಮಾಡುವ ಮೂಲಕ ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ ಎಂದರು.
ನಿವೃತ್ತ ಪೊಲೀಸ್ ಅಧಿಕಾರಿ ಬಸಲಿಂಗಪ್ಪ ಲಾಡಿ ಕುಟುಂಬದಿAದ ಬಸವಲಿಂಗೇಶ್ವರ ಶ್ರೀಗಳಿಗೆ ತುಲಾಭಾರ ಸೇವೆಗೈದರು.
ಈ ಸಂದರ್ಭ ನವಲಗುಂದದ ಶ್ರೀ ಬಸವಲಿಂಗ ಸ್ವಾಮೀಜಿ, ಜಿಗೇರಿಯ ಶ್ರೀ ಗುರುಸಿದ್ದೇಶ್ವರ ಸ್ವಾಮೀಜಿ, ಗುಡ್ಡದ ಅನವೇರಿ ವಿರಕ್ತಮಠದ ಶ್ರೀ ಶಿವಯೋಗೀಶ್ವರ ಸ್ವಾಮೀಜಿ, ಇಟಗಿಯ ಭೂಕೈಲಾಸ ಮೇಲುಗದ್ದುಗೆಯ ಶ್ರೀ ಗುರುಶಾಂತವೀರ ಸ್ವಾಮೀಜಿ, ಗಣ್ಯರಾದ ಸಿದ್ದಲಿಂಗಪ್ಪ ಶ್ಯಾಗೋಟಿ, ಅಮರೇಗೌಡ ಪಾಟೀಲ್, ಶೇಖರಗೌಡ ಮಡಿವಾಳಗೌಡ್ರ, ಕಲ್ಲನಗೌಡ ಪೊ.ಪಾಟೀಲ್, ಷಣ್ಮುಖಪ್ಪ ಪಾಟೀಲ್, ಬಸವರಾಜ ಪಾಟೀಲ್, ಮಾರುತೆಪ್ಪ ಗೊಡಿನಾಳ, ಅಜಯಕುಮಾರ ಜಡಿಯವರ, ಸಂಗಮೇಶ ಕೊಪ್ಪದ, ವೀರಪ್ಪ ಅರಳಿ, ಬಸಲಿಂಗಪ್ಪ ಕೊತ್ತಲ ಸೇರಿದಂತೆ ಮತ್ತಿತರರು ಇದ್ದರು.
-----

0/Post a Comment/Comments